ಹೋಗುವುದಾದರೆ ಹೋಗು

ಹೋಗುವುದಾದರೆ ಹೋಗು
ನಿನ್ನ ತವರಿಗೆ,
ನಿನ್ನ ಸಂತೋಷ ವಿನೋದಕೆ|
ಮತ್ತೆ ಹಾಗೆ ನಿನ್ನ ಸಂಭ್ರಮ, ಸಡಗರಕೆ
ನೀನು ತವರಿಗೆ ಕಳುಹಿಸಿ ನಾನು
ಖುಷಿಪಡುವೆ ಒಳಗೊಳಗೆ||

ಅಲ್ಲಿ ನಿನ್ನ ಅಮ್ಮ ನಿನಗೆ
ಕೈ ತುತ್ತ ಬಡಿಸಿದರೆ…
ಇಲ್ಲಿ ಬ್ರಹ್ಮಚಾರಿಯಾಗಿ ನಾನು
ಸುತ್ತುವೆ ಊರ ಗರಗರನೆ|
ಎಲ್ಲಾ ಸ್ನೇಹಿತರ ಕರೆಸಿ
ಮನೆಯಲೇ ಪಾರ್ಟಿಮಾಡುವೆ||

ಬೇಕಾದರೆ ಒಂದೆರಡು ದಿನ, ವಾರ
ತಡವಾಗಿಯೇ ಬಾ|
ನಿನ್ನ ಹಳೆಯ ಗೆಳತಿಯರನೆಲ್ಲಾ ಸಂದಿಸಿ
ಕುಶಲೋಪರಿಯ ವಿಚಾರಿಸಿ ಬಾ|
ರಜದ ಮಜವನೆಲ್ಲಾ ಪಡೆವೆ ನಾನಿಲ್ಲಿ
ಕಳೆದುಹೋದ ನನ್ನ ಸ್ವಾತಂತ್ರವ
ಮತ್ತೆ ಮತ್ತೆ ನೆನಪಿಸಿಕೊಳ್ಳುವೆ ನಾನಿಲ್ಲಿ|
ಹಾಗೆನಾದರೂ ಬೇಕೆನಿಸಿದಲ್ಲಿ
ನಾನೇ ಕರೆಸಿಕೊಳ್ಳುವೆ ನಿನ್ನನಿಲ್ಲಿ||

ಆದರೆ ಒಂದೇ ಒಂದು ವಿನಂತಿ!
ಮರಳಿ ಬರುವಾಗ ಮುಂಚೆ ಹೇಳಿ ಬಾ|
ಮನೆಯನೆಲ್ಲಾ ಶುಚಿಮಾಡಿಡುವೆ|
ಮತ್ತೆ ನಿನ್ನ ಕೂಡಿ ಸಂಸಾರ
ಮಾಡೆ ರೆಡಿಯಾಗುವೆ|
ಆಗಾಗ ಬೇಕು ಇಂಥಹ ಬ್ರೇಕು
ನಾನು ನೀನು ನೂರುಕಾಲ
ಸುಖವಾಗಿ ಬಾಳಬೇಕು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಫ್ರಿಜ್‌ನಲ್ಲಿಟ್ಟ ರುಚಿ ತರಕಾರಿಗಳು
Next post ಜನಶಕ್ತಿ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys